ಚೌತಿಯ ಸಂಭ್ರಮ, ಆಫೀಸಿಗೆ ಹೋಗಿ
ಬಂದು ಸಂಜೆ ಊರಿಗೆ ಹೋಗಬೇಕೆಂದು ನಿಶ್ಚಯಿಸಿದ್ದೆ,ಗಣಪತಿಯನ್ನು ಕೂರಿಸುತ್ತಾರೆ ನಮ್ಮ
ಮನೆಯಲ್ಲಿ , ಪಾಪ ಅಪ್ಪನೂ ಒಬ್ಬಂಟಿ ,ಅಮ್ಮನಿಗೆ ಅಡಿಗೆಮನೆ ಕೆಲಸವೇ ಜಾಸ್ಥಿ, ಹೋಗಿ
ಅಪ್ಪನಿಗೆ ಒಂದಿಷ್ಟು ಸಹಾಯ ಮಾಡುವ ಮನಸ್ಸು. ಬೆಳಿಗ್ಗೆ ಬೇಗನೆದ್ದು ಎಲ್ಲಾ ತಯಾರಿ
ಮಾಡಿಕೊಂಡು , ಹತ್ತು ನಿಮಿಶವಿನ್ನೂ ಇದ್ದುದರಿಂದ ಒಮ್ಮೆ ಫೇಸ್ ಬುಕ್ ನಲ್ಲಿ
ಕಣ್ಣಾಡಿಸಿದರೆ ಇಡಗುಂಜಿಯ ಗಣಪನ ಚಿತ್ರ ಪಟ ನೋಡಿ ಬಹಳ ಸಂತೋಷವಾಯಿತು, ಯಾಕೋ ಗೊತ್ತಿಲ್ಲ
ಇಡಗುಂಜಿ ಗಣಪನೆಂದರೆ ತುಂಬಾ ಆತ್ಮೀಯ, ನಮ್ಮ ಮನೆಯವನೇ ದೇವರಾಗಿದ್ದಾನೋ ಎಂಬಷ್ಟು !
ದೈಹಿಕ ಯಾತನೆ ಅವಳದಾದರೆ ನನ್ನದು ಮಾನಸಿಕವಾಗಿ,ನೋಡಲಾಗುತ್ತಿಲ್ಲ ಅವಳನ್ನು, ಕುಣಿದಾಡುತ್ತ ಓಡಾಡುತ್ತಿದ್ದ ಅವಳು ಮಲಗಿ ಒದ್ದಾಡುವದನ್ನು ಕಂಡು ಅಯ್ಯೋ ಅನಿಸಿತು ನನಗೆ. ಬಂದ ನರ್ಸಮ್ಮ ಯಾಕೆ ಅಷ್ಟೊಂದು ಕೂಗಾಡುತ್ತೀರಾ , ಎಲ್ಲರಿಗೂ ಆಗುವದೇ ಅಲ್ಲವೇ ಅಂದಾಗ ಬಿಟ್ಟೆ ಕೆಂಗಣ್ಣನ್ನು ನರ್ಸ್ ಎಡೆಗೆ, ನನ್ನ ಮಡದಿ ಒದ್ದಾಡುತ್ತಿದ್ದಾಳೆ ಇವಳಿಗೇನೂ ಅನ್ನಿಸುತ್ತಿಲ್ಲವಲ್ಲಾ,ಗೊತ್ತಿದ್ದೂ ಹೀಗೆ ಹೇಳುವಳಲ್ಲಾ ಅಂದುಕೊಂಡೆ .ಆದರೆ ಆಗಲೇ ಅನಿಸಿದ್ದು ಪ್ರತಿ ದಿನವೂ ಎಷ್ಟು ಜನರನ್ನು ನೋಡಬಹುದು ಅವಳು, ಎಷ್ಟೊಂದು ಜನರ ಸೇವೆ ಮಾಡಿರಬಹುದು ?ಹೌದು ಕೆಲಸಕ್ಕೋಸ್ಕರ ಸಂಬಳ ತೆಗೆದು ಕೊಳ್ಳುತ್ತಾಳಾದರೂ ,ಪರಿಚಯವಿಲ್ಲದ ಜನರ ನೋವಿಗಾಗುತ್ತಾಳಲ್ಲಾ.ರೋಗಿಗಳೋ ಗರ್ಭಿಣಿಯರೋ ಯಾವುದೇ ಹೊತ್ತಿನಲ್ಲಿ ಕರೆಯಲಿ ಬಂದು ಅವರು ಕೇಳಿದ್ದು ಮಾಡುತ್ತಾರಲ್ಲಾ .
ನೋವು ಜಾಸ್ಥಿ ಆಗಿದ್ದರಿಂದ ನನ್ನವಳನ್ನು ಡಾಕ್ಟರ್ ರೂಮಿನಿಂದ ಹೆರಿಗೆ ವಾರ್ಡಿಗೆ ಕರೆದುಕೊಂಡು ಹೋದ ನಂತರ , ನಾನು ಒಮ್ಮೆ ಮೊಬೈಲ್ ನೋಡುತ್ತಿದ್ದೆ ,ಒಮ್ಮೆ ವಾಚು ,ಎರಡೂ ಒಂದೇ ಸಮಯ ತೋರಿಸುತ್ತಿದ್ದವು, ಒಂದೊಂದೇ ನಿಮಿಷ ಜಾಸ್ಥಿ ಆಗುತ್ತಿತ್ತು,ನನ್ನ ಒಳಗೆ ಚಡಪಡಿಕೆ.ನನ್ನವಳ ಅಪ್ಪ ಅಮ್ಮ ಮತ್ತಿಬ್ಬರು ನೆಂಟರ ಕುತೂಹಲಭರಿತ ನೋಟ,ಒಮ್ಮೆ ನನ್ನನ್ನೂ , ಇನ್ನೊಮ್ಮೆ ಮುಚ್ಚಿದ ವಾರ್ಡಿನ ಬಾಗಿಲನ್ನೂ ನೋಡುತ್ತ ಅವರೊಳಗೇ ಚರ್ಚೆ ನಡೆಯುತ್ತಿತ್ತು ,ಹಿಂದಿನ ಹೆರಿಗೆ ಸಂಭ್ರಮಗಳ ಬಗ್ಗೆ ! ಮೌನಿಯಾಗಿ , ಎಲ್ಲೋ ಇದ್ದ ನನ್ನ ಮಾತಾಡಿಸುವ ಸಾಹಸ ಅವರದ್ದು, ಅಲ್ಲಿ ನನ್ನವಳು ಒದ್ದಾಡುತ್ತಿರುವಾಗ ನಾ ಹೇಗೆ ಹರಟೆ ಹೊಡೆಯಲಿ,ನನಗೆ ಬೇಕಿತ್ತು ಮೌನ,ಏಕಾಂತ .
ಸಮಯ ಭಾರವಾಗಿ ಹೆಜ್ಜೆ ಹಾಕುತ್ತಿರುವಾಗ ನಾನೂ ಹೆಜ್ಜೆಯನ್ನಿಟ್ಟೆ ಆಸ್ಪತ್ರೆಯ ಮೆಟ್ಟಿಲಿನೆಡೆಗೆ, ಮೆಟ್ಟಿಲಿಳಿವಾಗ ಅಲ್ಲಿಯೂ ಕಂಡಿದ್ದು ನನ್ನ ಗಣಪನ ಒಂದು ಸುಂದರ ಮೂರ್ತಿ, ಹೆದರಿದಿರು ಮಂಕೇ ,ನಾನಿದ್ದೇನೆ ಎಂದು ಮುಗುಳ್ನಗುತ್ತ ನನಗೆ ಸಾಂತ್ವನ ಹೇಳಿದಂತಿತ್ತು ಅವನ ನೋಟ. ಅವನನ್ನೇ ದ್ರಷ್ಟಿಸುತ್ತಾ ಅಲ್ಲಿಯೇ ನಿಂತೆ ಸುಮಾರು ಹೊತ್ತು, ಯಾಕೋ ಈಗ ಸಮಯ ವೇಗವಾಗಿ ಸಾಗತೊಡಗಿತು !
ಅದೇ ಸಮಯದಲ್ಲಿ ಹೆರಿಗೆ ವಾರ್ಡಿನ ಬಾಗಿಲು ತೆರೆಯಿತು, ಎಲ್ಲರೂ ಅತ್ತ ಧಾವಿಸಿದೆವು.ಒಬ್ಬಳು ನರ್ಸಮ್ಮ ಹೊರ ಬಂದವಳೇ , ಆತಂಕ ಬೇಡ, ಆರಾಮಾಗಿದ್ದಾರೆ ಎಂದಳು. ಆರಾಮಿಗಿದ್ದಾರೆ ಅದು ಸರಿ,ಆದರೆ ಯಾರು ಯಾರು ಎಂಬ ಕುತೂಹಲ.ನಾನಂತೂ ಮೌನಿಯಾಗಿದ್ದೆ, ನನ್ನ ಮನೆಯವಳ ತಾಯಿಗೆ ತಡೆಯಲಾಗಲಿಲ್ಲ, ಕೇಳಿದಳು ನರ್ಸಮ್ಮನನ್ನ , ಹೆರಿಗೆ ಆಯಿತೇ, ಹೆರಿಗೆ ಆದರೆ ಕಂದಮ್ಮ ಹೇಗಿದೆ,ಗಂಡೋ ಹೆಣ್ಣೋ ?
ನನ್ನ ಮತ್ತು ನನ್ನ ಮನೆಯವಳ ಇಬ್ಬರ ಭಾವನೆಯಲ್ಲೂ ಗಂಡಾಗಲಿ ಹೆಣ್ಣಾಗಲಿ ,ಹುಟ್ಟುವ ಕೂಸು ಆರೋಗ್ಯವಂತನಾಗಿದ್ದರೆ ಆಯಿತು . ಹೆಣ್ಣಾದರೆ ಒಂದು ಚಂದ,ಗಂಡಾದರೆ ಇನ್ನೊಂದು ಬಗೆಯದ್ದು., ಯಾವುದಾದರೂ ಸಂತಸವೆಂಬ ಬಯಕೆ.
ಹೀಗಿರುವಾಗ ನರ್ಸಮ್ಮ ಎಂದಳು , ಗಂಡು ಮಗು ಜನಿಸಿದೆ ಎಂದು,ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದಾಗ ಅಲ್ಲಿದ್ದ ಎಲ್ಲರಲ್ಲೂ ಸಂಭ್ರಮ,ಖುಶಿಯೋ ಖುಶಿ.ಅಜ್ಜನ ಸಂಭ್ರಮ, ಅಜ್ಜಿಯ ಸಡಗರ. ಬಹು ದಿನದ ನಂತರ ಅಜ್ಜ ಅಜ್ಜಿ ಆದ ಅವರ ಆನಂದಕ್ಕೆ ಪಾರವೇ ಇಲ್ಲ , ಆದರೆ ನನಗೆ ?
ಯಾಕೋ ಗೊತ್ತಿಲ್ಲೆ, ಆ ಸಮಯದಲ್ಲಿ ನನ್ನಲ್ಲಿನ ಭಾವ ಯಾವುದು ಎಂಬುದನ್ನು ವಿವರಿಸುವದು ಕಷ್ಟ, ಅವಸರದಲ್ಲಿ ಓಡಿ ಹೋಗಿ, ಸಿಕ್ಕ ಬಾತ್ ರೂಮನ್ನು ಹೊಕ್ಕು ಕದ ಜಡಿದೆ, ಕಣ್ಣೀರ ಧಾರೆ ಉಕ್ಕಿತ್ತು , ಸಂಭ್ರಮದ ,ಖುಶಿಯ ಕಣ್ಣೀರೋ ಗೊತ್ತಿಲ್ಲ,ಆದರೆ ಸುಮಾರು ಹೊತ್ತು ತಡೆಯಲಾಗದಷ್ಟು ಬಿಕ್ಕಳಿಕೆ.ನೀರೆರೆಚಿಕೊಂಡು, ಒರೆಸಿಕೊಂದೆ ಮುಖವನ್ನು. ಹೊರಗೆ ಬಂದು ಎಲ್ಲರ ಸಂಭ್ರಮದಲ್ಲಿ ನಾನೂ ಭಾಗಿಯಾದೆ. ಆಗ ಒಂದು ಸಮಾಧಾನ, ಅಂತೂ ನಾನೂ ಅಪ್ಪನಾದೆ ಎಂದು. ಈ ವಿಷಯವನ್ನು ಬಸ್ಸಿನಲ್ಲಿ ಬರುತ್ತಿರುವ ನನ್ನ ಹೆತ್ತಮ್ಮನಿಗೆ ಹೇಳುವ ಆಸೆಯಿಂದ ಮೊಬೈಲ್ ನಂಬರ್ ಒತ್ತಿದೆ, ಆದರೆ ಬೇಕಾದಾಗಲೆಲ್ಲಾ ಹೇಗೆ ಸಿಕ್ಕೀತು ಆ ನೆಟ್ ವರ್ಕ್ , ಬೇಸರ ವಾಯಿತು, ಇರಲಿ ಆಮೇಲೆ ಹೇಳಿದರಾಯಿತು ಎಂದುಕೊಂಡು, ತಂಗಿಗೆ ಫೋನ್ ಮಾಡಿ ವಿಷಯ ತಿಳಿಸುವಾಗಲೂ ಮತ್ತೆ ಗಂಟಲು ಕಟ್ಟಿತ್ತಲ್ಲಾ! ದೊಡ್ಡಮ್ಮ ಬೆಳಗಿನಿಂದಲೂ ಸುಮಾರು ಸಲ ವಿಚಾರಿಸಿದ್ದಳು ಇಲ್ಲಿನ ಬಗ್ಗೆ,ಅವಳಿಗೆ ಕರೆ ಮಾಡಿದಾಗ "ಏನಾಯ್ತೋ ಮಗನೇ, ಸಿಹಿ ಸುದ್ದಿ ಇದೆಯೋ " ಅಂದಾಗ " ದೊಡ್ಡಮ್ಮ ,ಅಂತೂ ಅಪ್ಪನಾದೆ " ಅಷ್ಟೆ ನನ್ನ ಬಾಯಿಂದ ಬಂದಿದ್ದು. ಮುಂದೆ ಮಾತು ಹೊರಡಲು ನನ್ನ ಗಂಟಲು ಸಹಕರಿಸಲಿಲ್ಲ. ದೊಡ್ಡಮ್ಮ ನನ್ನ ಹೆತ್ತಮ್ಮನಿದ್ದಂತೆ.
ಆಮೇಲೆ ಸುಧಾರಿಸಿಕೊಂಡು ಎಲ್ಲರಿಗೂ ವಿಷಯ ಮುಟ್ಟಿಸಿದೆ. ಅಷ್ಟೇ ಹೊತ್ತಿನಲ್ಲಿ ನನ್ನ ಮಗ ,ನನ್ನ ಪ್ರಥಮ ಕುಮಾರನನ್ನು ಎತ್ತಿಕೊಂಡು ನರ್ಸಮ್ಮ ಬಂದಳು, ಅಲ್ಲಿ ಇದ್ದವರಿಗೆ ಖುಶಿ,ಅರೆ ಚಂದ ಇದೆಯಲ್ಲಾ ಮಗು ಎಂದು, ಯಾರ ಹಾಗಿರಬಹುದು,ಅಪ್ಪನ ಹೋಲಿಕೆಯೋ,ಅಮ್ಮನದ್ದೋ ಎಂಬ ಚರ್ಚೆ.ಬಹಳಷ್ಟು ಜನ ಇದೇ ಪ್ರಷ್ನೆ ಕೇಳುತ್ತಾರೆ,ಆದರೆ ನನಗೆ ಯಾವಾಗಲೂ ಗೊತ್ತಾಗುವುದಿಲ್ಲ ಅದೂ ಪ್ರಥಮ ದಿನವೇ ಹೇಗೆ ಹೇಳಲು ಸಾಧ್ಯ. ಗೊತ್ತಾಗದ ನಾನು ಮತ್ತು ನನ್ನ ಹಸುಗೂಸು ಸುಮ್ಮನಿದ್ದೆವು ! ಆ ನನ್ನ ಕಂದ ನನ್ನನ್ನೇ ದ್ರಷ್ಟಿಸಿ ಅಪ್ಪಾ ಅಂದ ಹಾಗೆ ಅನ್ನಿಸಿತು. ಅರೆ ಇಂದಿನಿಂದ ನಾನು ಒಬ್ಬ ಉಂಡಾಡಿ ಗುಂಡನಲ್ಲ. ನನ್ನ ಕರುಳಿನ ಕುಡಿಯ ಪೋಷಕ ಎಂಬ ಭಾವ. ಮನಸ್ಸಿನಲ್ಲೇ ಅಂದುಕೊಂಡೆ " ಮಗನೇ,ಈ ಭುವಿಗೆ ನಿನಗೆ ಸ್ವಾಗತ,ನಿನ್ನ ತಂದೆ ಕಣೋ ನಾನು,ನಿನ್ನ ಮುಂದಿನ ಪಾಲಕ,ಗೆಳೆಯ, ಪ್ರೋತ್ಸಾಹಕ, ನಾನು ನಿನಗೆ ಮೊದಲ ಉಡುಗೊರೆ ಕೊಟ್ಟೆದ್ದೇನೋ, ಕಣ್ಣೀರ ಹನಿಗಳನ್ನು"
ಹಿಂದೆಯೆ ನನ್ನ ಮಡದಿ, ಪ್ರಥಮ ಪ್ರಸವವಾದ ಸಂಭ್ರಮದೊಂದಿಗೆ ರೂಮಿಗೆ ಬಂದಾಗ ಒಂದು ಹೂಮುತ್ತನ್ನಿಟ್ಟೆ ಅವಳ ಹಣೆಯ ಮೇಲೆ. ಮನಸ್ಸಿನಲ್ಲೇ ಒಂದು ಧನ್ಯವಾದವನ್ನೂ ಕೊಟ್ಟೆ , ನನ್ನ ಬಾಳಿಗೆ ಒಂದು ಅರ್ಥವನ್ನು ಕೊಟ್ಟಿದ್ದಕ್ಕೆ.ಬೆಳಿಗ್ಗೆಯಿಂದ ಒದ್ದಾಡಿದವಳು ಇವಳೇನೋ ಅನ್ನಿಸಿತು, ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಕೂಗಿದ್ದು ಮರೆತೇ ಹೋಗಿದ್ದಳವಳು.ಮಂದಹಾಸ ಅವಳ ಮುಖವನ್ನು ತುಂಬಿತ್ತು. ಅಮ್ಮನಾದ ಧನ್ಯತೆ ಇತ್ತು.ಅವಳನ್ನು ಮಾತಾಡಿಸಿ ,ಪಕ್ಕದಲ್ಲೇ ಮಲಗಿ ಬಾಯಿ ಆಡಿಸುತ್ತಿದ್ದ ನನ್ನ ಕಂದಮ್ಮನನ್ನು ದಿಟ್ಟಿಸತೊಡಗಿದೆ, ಎಷ್ಟು ನೋಡಿದರೂ ಕಡಿಮೆ,ನೋಡುತ್ತಲೇ ಇರಬೇಕೆಂಬ ಬಯಕೆ, ಅವನ ರೂಪವನ್ನು ಕಣ್ತುಂಬಿಸಿಕೊಳ್ಳುವ ಆಸೆ, ನನ್ನವಳು ಕೈ ಚಿವುಟಿದಳು ! ಸಾಕು ನೋಡಿದ್ದು, ಅಪ್ಪ ಅಮ್ಮನದ್ದೇ ದ್ರಷ್ಟಿ ತಾಗುತ್ತಂತೆ ಹಸಿಗೂಸಿಗೆ ಎಂದಾಗ ಎಲಾ ಇವಳಾ ,ತನಗೆ ನೋಡಲಿಕ್ಕೆ ಆಗ್ತಾ ಇಲ್ಲಾ ಎದ್ದು ಕೂತು ಅದಿಕ್ಕೆ ನನ್ನನ್ನೂ ನೋಡುವುದು ಬೇಡ ಅನ್ನುತ್ತಿರಬಹುದು ಅಂದುಕೊಂಡೆ.ಮನಸ್ಸಿನಲ್ಲಿ ಬೈದುಕೊಂಡರೂ ನನ್ನವಳನ್ನು ನೋಡುಲು ಆನಂದವಾಗುತ್ತಿತ್ತು ನನಗೆ, ಮಾತ್ರತ್ವ ಪಡೆದ ಪ್ರಸನ್ನ ಭಾವ ಇತ್ತು ಅವಳಲ್ಲಿ.
ಅಷ್ಟರಲ್ಲೇ ನನ್ನ ಅಪ್ಪ ಅಮ್ಮನ ಆಗಮನ. ಅಜ್ಜ ಅಜ್ಜಿಯಾದ ಸಂಭ್ರಮ. ಆನಂದಮಯ ಆ ಸಮಯ. ಅವರಿಗೆ ಅತ್ಯಂತ ದೊಡ್ಡ ಘಳಿಗೆ. ತಮಗೇ ಮಗುವಾದಾಗಲೂ ಇಷ್ಟು ಸಂಭ್ರಮವಿತ್ತೋ ಇಲ್ಲವೋ,ಆದರೆ ಮಗನ ಮಗನನ್ನು ನೋಡಿ ಅವರ ಬಾಲ್ಯ ಮರುಕಳಿಸಿತ್ತು. ಮೊಮ್ಮಗುವನ್ನು ನೋಡುವ ಹೊತ್ತಿನಲ್ಲಿ ಪಕ್ಕದಲ್ಲೇ ನಿಂತಿದ್ದ ಮಗನನ್ನೂ ಮರೆತಿದ್ದರವರು. ಸ್ವಲ್ಪ ಹೊತ್ತಿನ ನಂತರ ಅಪ್ಪ . ತಮ್ಮಾ ಅಂತೂ ಅಪ್ಪನಾದೆ ಎಂದು ಬಿಗಿದಪ್ಪಿಕೊಂಡಾಗ ನಾನು ಮನಸ್ಸಿನಲ್ಲಿ ಅಂದುಕೊಂಡೆ " ಹೌದು ಅಪ್ಪಾ ,ಚಿಕ್ಕವನಾಗಿದ್ದಾಗ ನಿನ್ನಂತೆ ಆಗಬೇಕೆಂದುಕೊಂಡಿದ್ದೆ,ತಡವಾದರೂ ಈಗ ಆದೆನಾ ಅಪ್ಪ. ನನ್ನ ಜವಾಬ್ದಾರಿಗಳ ಸರಣಿಗೆ ಮಗುವೆಂಬ ಇನ್ನೊಂದು ಜವಾಬ್ದಾರಿ ಸೇರ್ಪಡೆಯಾಯಿತು"
ರಾತ್ರಿ ಆಸ್ಪತ್ರೆಯಲ್ಲಿ ಇಬ್ಬರೂ ಅಜ್ಜಿಯಂದಿರು ಇರುವುದೆಂದು ನಿರ್ಧಾರವಾಯಿತು,ಬಾಕಿಯವರನ್ನು ಕಳುಹಿಬಂದೆ.ಆಮೇಲೆ ಊಟ ಮುಗಿಸಿ ಅಮ್ಮನನ್ನು ಕರೆದುಕೊಂಡು ಹೋಗುವಾಗ ಅಮ್ಮನೆಂದಳು " ತಮ್ಮಾ ,ನೀನು ಬರುತ್ತೀಯೆಂದು ಚಕ್ಕಲಿ ,ವಡೆ ಮಾಡಿದ್ದೆ,ನೋಡಿದ್ರೆ ಈಗ ಹಬ್ಬವೂ ಇಲ್ಲ, ನೀನೂ ಬರುವುದಿಲ್ಲ ಮನೆಗೆ,ಇಲ್ಲಿಂದನೇ ಆಫೀಸಿಗೆ ಹೋಗ್ತಿನಿ ಅಂತಿದಿಯಾ!!!" ಇದೇನಪ್ಪಾ,ನನ್ನಮ್ಮನ ಯೋಚನೆ. ನನಗೆ ಮಗು ಮಲಗಿರಬಹುದೆ, ಅಳುತ್ತಿರಬಹುದೇ ಎಂಬ ಚಿಂತೆಯಾದರೆ ,ಇವಳಿಗೆ ವಡೆ ಚಕ್ಕುಲಿಯ ಚಿಂತೆ ಆಯಿತಲ್ಲಾ. ಆದರೆ ಅವಳ ಭಾವನೆ ತಪ್ಪಲ್ಲವಲ್ಲಾ. ಯಾಕೆಂದರೆ ಅಮ್ಮ ಮಾಡುವದು ತನಗಾಗಿ ಅಲ್ಲ ತನ್ನ ಮಕ್ಕಳಿಗಾಗಿ.ಆದರೆ ಪಾಪ ತನ್ನ ಮಗ ತಿನ್ನಲು ಬರುವುದಿಲ್ಲವಲ್ಲಾ ಎಂಬ ಸಂಕಟ. ನಾನು ಬರೀ ಒಂದು ದಿನದ ಪಿತ,ಅಷ್ಟರಲ್ಲೇ ನನ್ನ ಮಗನ ಬಗ್ಗೆ ಚಿಂತೆ, ಆದರೆ ಅವಳೋ ಬಹಳಷ್ಟು ವರ್ಷಗಳಿಂದ ನನ್ನ ಅಮ್ಮ.
ಆಯಿತಮ್ಮಾ ,ನೋಡ್ತಿನಿ ಸಾಧ್ಯ ಆದರೆ ಬರ್ತೇನೆ ಎಂದೆ.
ರಾತ್ರಿ ಗಂದಸರು ಇರಗೊಡುವದಿಲ್ಲ ಆಸ್ಪತ್ರೆಯಲ್ಲಿ, ಆದ್ದರಿಂದ ಮತ್ತೊಮ್ಮೆ ನಿದ್ರಿಸುತ್ತಿದ್ದ ಮಗನ ಮುಖವನ್ನು ನೋಡಿ ಹೊರಟವನಿಗೆ , ಮತ್ತೆ ನೆನಪಾಗಿದ್ದು ಗಣಪ, ನಮ್ಮ ಗಣಪ !
ನಾ ನಂಬಿದ ದೇವರು ಅವನ ಅಮ್ಮನ ದಿನದಂದು ,ನನಗೆ ಉಡುಗೊರೆಯನ್ನಿತ್ತನಲ್ಲಾ ಎಂದು ಗಣಪನಿಗೆ ಮನಸ್ಸಿನಲ್ಲೇ ಒಂದು ಧನ್ಯವಾದವನ್ನು ಕೊಟ್ಟೆ.ಆಸ್ಪತ್ರೆಯಲ್ಲೇ ಇದ್ದ ಅವನ ಮೂರ್ತಿಗೆ ಕೈ ಮುಗಿದೆ. ಮಣ್ಣಿನ ರೂಪದಲ್ಲಿ ಚೌತಿಯಂದು ನಮ್ಮ ಮನೆಗೆ ಬರುವ ಗಣಪ , ಈಗ ನನಗೊಂದು ಅವನ ರೂಪವನ್ನೇ ಕೊಟ್ಟನೋ ಅಂದುಕೊಂಡು ಮುಗುಳ್ನಕ್ಕೆ.
*******************************************************
ಆಸ್ಪತ್ರೆಯಲ್ಲಿದ್ದೇನೆ ನನ್ನ ಪುಟ್ಟ ಸಂಸಾರದೊಟ್ಟಿಗೆ,ನನ್ನ ಕಂದನೊಂದಿಗೆ,ಅಬ್ಬಾ ಅವನೋ ತನ್ನ ಪುಟ್ಟ ಪುಟ್ಟ ಕಣ್ಣುಗಳನ್ನು ಮಿಟುಕಿಸುತ್ತ ಏನನ್ನೋ ಹುಡುಕುವ ಯತ್ನದಲ್ಲಿದ್ದಾನೆ,ಯಾರನ್ನು ಹುಡುಕುತ್ತಿರಬಹುದು,ಏನನ್ನು ಹುಡುಕುತ್ತಿರಬಹುದು,ನಾನೂ ನೋಡದ ಜಗತ್ತು ಅವನಿಗೆ ಗೊತ್ತಿರಬಹುದೇ ಎಂಬ ಶಂಕೆ ನನಗೆ.ಈಗಲೇ ಇವನ ಆಲೋಚನಾ ಸರಣಿ ಪ್ರಾರಂಭವಾಗಿದೆ ಎಂಬಂತೆ ಗಲ್ಲಕ್ಕೆ ತನ್ನ ಪುಟ್ಟ ಕೈಯನ್ನು ಕೊಟ್ಟು ಏನೋ ಯೋಚಿಸುತ್ತಿದ್ದಾನಲ್ಲ,ಮಲಗಿದಾಗಲೂ ಅದೇ ಭಂಗಿ.ಯಾಕೋ ಗೊತ್ತಿಲ್ಲ, ಒಮ್ಮೊಮ್ಮೆ ಎರಡೂ ಕೈಗಳನ್ನು ಆಶೀರ್ವದಿಸುವಂತೆ ಇಟ್ಟುಕೊಳ್ಳುವನಲ್ಲಾ ! ಅಸೆಯಾಗುತ್ತಿದೆ ಒಮ್ಮೆ ಕೈ ಮುಗಿದು ಬಿಡೋಣ ಎಂದು. ಆದರೆ ಬಾಕಿ ಜನರನ್ನು ನೋಡಿ ನನ್ನನ್ನು ನಾನೇ ನಿಯಂತ್ರಿಸಿಕೊಳ್ಳುವೆ, ಹಸುಗೂಸು ದೇವರ ಸಮಾನ ಎನ್ನುವರು ಹಿರಿಯರು,ತಪ್ಪೇನಿಲ್ಲ ನಮನ ಸಲ್ಲಿಸಲು ಅಂದುಕೊಂಡೆ. ಆಗಾಗ ಕಿರುಚಾಟ, ಮತ್ತೆ ಕಿರು ನಿದ್ರೆ, ಏನೇ ಮಾಡಿದರೂ ಒಂದು ಸುಂದರತೆ. ಮುಗ್ಧತೆ,ಈ ಮುಗ್ಧ ಜೀವಿಗೆ ಮುಂದೆ ತುಂಬುವುದಿದೆಯಲ್ಲಾ ಎಲ್ಲಾ ವಿಷಯಗಳನ್ನು.
ಬಹಳಷ್ಟು ನೆಂಟರಿಷ್ಟರೂ ಬಂದಿದ್ದರು ನಮ್ಮನ್ನು ಮಾತಾಡಿಸಲು. ಎಲ್ಲರನ್ನೂ ಮಾತಾಡಿಸುತ್ತಾ ಕಂದಮ್ಮನೊಂದಿಗೆ ಇದ್ದೆ, ಆದರೆ ಆಫೀಸ್ ಕರೆಯುತ್ತಲಿದೆ,ಅದಕ್ಕೆ ಹೊರಟೆ, ವಾಪಸ್,ನನ್ನ ಕುಮಾರ ಕಂಠೀರವನಿಗೊಂದು ಮುತ್ತನ್ನಿಟ್ಟು. ಬರುವೆ ಮಗನೇ ನಿನ್ನ ನೋಡಲು ಬೇಗನೇ ಎನ್ನುತ್ತಾ.
ಈಗಲೇ ಯುದ್ಧಕ್ಕೆ ಹೊರಡುವವನಂತೆ, ಸಕಲ ಆಫೀಸ್ ಪೋಷಾಕು ಧರಿಸುತ್ತಿದ್ದಾಗ ಮೊಬೈಲ್
ಫೋನ್ ತನ್ನ ಬಳಿಗೆ ಕರೆಯಿತು ಕಿರುಚುತ್ತ ! ನೋಡಿದರೆ ನನ್ನ ಮನದನ್ನೆಯ ಕರೆಯಾಗಿತ್ತು
,ತುಂಬು ಗರ್ಭಿಣಿಯಾದ ಅವಳು ತನ್ನ ತವರು ಮನೆಯಿಂದ ಕರೆ ಮಾಡಿದಾಗ ನಾನಂದೆ "ಯಾಕೇ ,ನನ್ನ
ನೆನಪು ಕಾಡಿತಾ ಬೆಳ್ಳಂಬೆಳಿಗ್ಗೆ" . ಅವಳೆಂದಳು "ಇಲ್ಲಾರಿ ಸ್ವಲ್ಪ ಲೇಟಾಗಿ ಆಫೀಸಿಗೆ
ಹೋಗಿ, ನೀವು ಬರಬೇಕಾಗಬಹುದೇನೋ,ಯಾಕೋ ನೋವು ಬರ್ತಾ ಇದೆ" ಅಂದಾಗ ಮತ್ತೊಮ್ಮೆ ಈಗಷ್ಟೇ
ನೋಡಿದ್ದ ಇಡಗುಂಜಿ ಗಣಪ ನೆನಪಾದನಲ್ಲಾ ! ಅರೆ ಇದೇನಿದು ,ಇನ್ನೊಂದು ವಾರವಿತ್ತು
ವೈದ್ಯರು ಕೊಟ್ಟ ಸಮಯ,ಈಗ್ಯಾಕೆ ಇವಳಿಗೆ ನೋವು ಅಂದುಕೊಂಡೆ, ಮತ್ತೆ ಸ್ವಲ್ಪ ಹೊತ್ತಿಗೆ
ಇನ್ನೊಂದು ಫೋನ್ ಅವಳಿಂದಲೇ " ಇಲ್ಲಾರೀ ನೋವು ತಡ್ಕೊಳ್ಳೋಕೆ ಆಗ್ತಾ ಇಲ್ಲಾ,
ಆಸ್ಪತ್ರೆಗೆ ಹೋಗ್ತಾ ಇದ್ದೇನೆ" ಅಂದಾಗಾ ನನ್ನ ಒಡಲೊಳಗೂ ನೋವಾಯ್ತಲ್ಲಾ! ಗಣಪಾ
ನನ್ನವಳಿಗೆ ಪ್ರಸವ ವೇದನೆಯನ್ನು ಸಹಿಸಿಕೊಳ್ಳುವ ಶಕ್ತಿ ಕೊಡು ಎಂದುಕೊಂಡೆ. ಅವಸರದಲ್ಲಿ
ನನ್ನ ಯುನಿಫಾರ್ಮ್ ಬಿಚ್ಚೆಸೆದು ಸಿಕ್ಕಿದ ಬಟ್ಟೆ ಹಾಕಿಕೊಂಡು ,ಅಫೀಸ್ ಬಾಸಿಗೆ ಒಂದು
ಫೋನಾಯಿಸಿ ಕಾರನ್ನೇರಿ ಹೊರಟೆ.
ದಾರಿಯುದ್ದಕ್ಕೂ ನೆಟ್ ವರ್ಕ್ ಸಿಕ್ಕಿದ ಕೂಡಲೇ ಅಲ್ಲಿಯ ಸಮಾಚಾರ ತಿಳಿಯುತ್ತ ,ನನ್ನ ಮನೆಯವರಿಗೂ ಸುದ್ದಿ ಮುಟ್ಟಿಸಿದೆ, ಗಣಪತಿಯ ಹೆಸರಲ್ಲಿ ಒಂದು ತೆಂಗಿನಕಾಯಿ ತೆಗೆದಿಡಿ ಎನ್ನುವದನ್ನೂ ಮರೆಯಲಿಲ್ಲ.ಅಪ್ಪ ಅಮ್ಮನೂ ಕೂಡಲೇ ಹೊರಟರು ಬಸ್ಸಿನಲ್ಲಿ ನನ್ನ ಮನೆಯವಳಿರುವ ಊರಿನ ಕಡೆಗೆ. ಅಂತೂ ಇಂತೂ ಹೋಗಿ ಸೇರಿದೆ ಆಸ್ಪತ್ರೆ.ದಾಪುಕಾಲಿಡುತ್ತಾ ರೂಮಿಗೆ ಹೊಕ್ಕವನಿಗೆ ಕಂಡಿದ್ದೇನು, ವಿಲಿ ವಿಲಿ ಒದ್ದಾಡುತ್ತಿರುವ ಮನೆಯವಳು,ಕೂಗು ಬೇರೆ. ಅಬ್ಬಾ ದೇವರು ಒಂದು ಸಂಭ್ರಮಕ್ಕಾಗಿ ಎಷ್ಟೊಂದು ನೋವನ್ನಿಟ್ಟಿದ್ದಾನೆ ಹೆಣ್ಣಿಗೆ, ಪ್ರಸವದ ಸಂಭ್ರಮ ಒಂದು ಕಡೆ,ಇನ್ನೊಂದು ಕಡೆ ಯಾತನೆ. ಅದಕ್ಕೇ ಇರಬೇಕು ಭಾರತೀಯರು ಹೆಣ್ಣಿಗೆ ಮಾತೆಯ ಸ್ಥಾನ ನೀಡಿರುವದು, ಪೂಜ್ಯನೀಯಳೆಂಬುದು.ಜನನಿ ಅವಳು,ಗಂಡಸರಿಂದ ಸಾಧ್ಯವಾಗದ ಈ ಕಾರ್ಯವನ್ನು ಮಾಡುವವಳು.
ದಾರಿಯುದ್ದಕ್ಕೂ ನೆಟ್ ವರ್ಕ್ ಸಿಕ್ಕಿದ ಕೂಡಲೇ ಅಲ್ಲಿಯ ಸಮಾಚಾರ ತಿಳಿಯುತ್ತ ,ನನ್ನ ಮನೆಯವರಿಗೂ ಸುದ್ದಿ ಮುಟ್ಟಿಸಿದೆ, ಗಣಪತಿಯ ಹೆಸರಲ್ಲಿ ಒಂದು ತೆಂಗಿನಕಾಯಿ ತೆಗೆದಿಡಿ ಎನ್ನುವದನ್ನೂ ಮರೆಯಲಿಲ್ಲ.ಅಪ್ಪ ಅಮ್ಮನೂ ಕೂಡಲೇ ಹೊರಟರು ಬಸ್ಸಿನಲ್ಲಿ ನನ್ನ ಮನೆಯವಳಿರುವ ಊರಿನ ಕಡೆಗೆ. ಅಂತೂ ಇಂತೂ ಹೋಗಿ ಸೇರಿದೆ ಆಸ್ಪತ್ರೆ.ದಾಪುಕಾಲಿಡುತ್ತಾ ರೂಮಿಗೆ ಹೊಕ್ಕವನಿಗೆ ಕಂಡಿದ್ದೇನು, ವಿಲಿ ವಿಲಿ ಒದ್ದಾಡುತ್ತಿರುವ ಮನೆಯವಳು,ಕೂಗು ಬೇರೆ. ಅಬ್ಬಾ ದೇವರು ಒಂದು ಸಂಭ್ರಮಕ್ಕಾಗಿ ಎಷ್ಟೊಂದು ನೋವನ್ನಿಟ್ಟಿದ್ದಾನೆ ಹೆಣ್ಣಿಗೆ, ಪ್ರಸವದ ಸಂಭ್ರಮ ಒಂದು ಕಡೆ,ಇನ್ನೊಂದು ಕಡೆ ಯಾತನೆ. ಅದಕ್ಕೇ ಇರಬೇಕು ಭಾರತೀಯರು ಹೆಣ್ಣಿಗೆ ಮಾತೆಯ ಸ್ಥಾನ ನೀಡಿರುವದು, ಪೂಜ್ಯನೀಯಳೆಂಬುದು.ಜನನಿ ಅವಳು,ಗಂಡಸರಿಂದ ಸಾಧ್ಯವಾಗದ ಈ ಕಾರ್ಯವನ್ನು ಮಾಡುವವಳು.
ದೈಹಿಕ ಯಾತನೆ ಅವಳದಾದರೆ ನನ್ನದು ಮಾನಸಿಕವಾಗಿ,ನೋಡಲಾಗುತ್ತಿಲ್ಲ ಅವಳನ್ನು, ಕುಣಿದಾಡುತ್ತ ಓಡಾಡುತ್ತಿದ್ದ ಅವಳು ಮಲಗಿ ಒದ್ದಾಡುವದನ್ನು ಕಂಡು ಅಯ್ಯೋ ಅನಿಸಿತು ನನಗೆ. ಬಂದ ನರ್ಸಮ್ಮ ಯಾಕೆ ಅಷ್ಟೊಂದು ಕೂಗಾಡುತ್ತೀರಾ , ಎಲ್ಲರಿಗೂ ಆಗುವದೇ ಅಲ್ಲವೇ ಅಂದಾಗ ಬಿಟ್ಟೆ ಕೆಂಗಣ್ಣನ್ನು ನರ್ಸ್ ಎಡೆಗೆ, ನನ್ನ ಮಡದಿ ಒದ್ದಾಡುತ್ತಿದ್ದಾಳೆ ಇವಳಿಗೇನೂ ಅನ್ನಿಸುತ್ತಿಲ್ಲವಲ್ಲಾ,ಗೊತ್ತಿದ್ದೂ ಹೀಗೆ ಹೇಳುವಳಲ್ಲಾ ಅಂದುಕೊಂಡೆ .ಆದರೆ ಆಗಲೇ ಅನಿಸಿದ್ದು ಪ್ರತಿ ದಿನವೂ ಎಷ್ಟು ಜನರನ್ನು ನೋಡಬಹುದು ಅವಳು, ಎಷ್ಟೊಂದು ಜನರ ಸೇವೆ ಮಾಡಿರಬಹುದು ?ಹೌದು ಕೆಲಸಕ್ಕೋಸ್ಕರ ಸಂಬಳ ತೆಗೆದು ಕೊಳ್ಳುತ್ತಾಳಾದರೂ ,ಪರಿಚಯವಿಲ್ಲದ ಜನರ ನೋವಿಗಾಗುತ್ತಾಳಲ್ಲಾ.ರೋಗಿಗಳೋ ಗರ್ಭಿಣಿಯರೋ ಯಾವುದೇ ಹೊತ್ತಿನಲ್ಲಿ ಕರೆಯಲಿ ಬಂದು ಅವರು ಕೇಳಿದ್ದು ಮಾಡುತ್ತಾರಲ್ಲಾ .
ನೋವು ಜಾಸ್ಥಿ ಆಗಿದ್ದರಿಂದ ನನ್ನವಳನ್ನು ಡಾಕ್ಟರ್ ರೂಮಿನಿಂದ ಹೆರಿಗೆ ವಾರ್ಡಿಗೆ ಕರೆದುಕೊಂಡು ಹೋದ ನಂತರ , ನಾನು ಒಮ್ಮೆ ಮೊಬೈಲ್ ನೋಡುತ್ತಿದ್ದೆ ,ಒಮ್ಮೆ ವಾಚು ,ಎರಡೂ ಒಂದೇ ಸಮಯ ತೋರಿಸುತ್ತಿದ್ದವು, ಒಂದೊಂದೇ ನಿಮಿಷ ಜಾಸ್ಥಿ ಆಗುತ್ತಿತ್ತು,ನನ್ನ ಒಳಗೆ ಚಡಪಡಿಕೆ.ನನ್ನವಳ ಅಪ್ಪ ಅಮ್ಮ ಮತ್ತಿಬ್ಬರು ನೆಂಟರ ಕುತೂಹಲಭರಿತ ನೋಟ,ಒಮ್ಮೆ ನನ್ನನ್ನೂ , ಇನ್ನೊಮ್ಮೆ ಮುಚ್ಚಿದ ವಾರ್ಡಿನ ಬಾಗಿಲನ್ನೂ ನೋಡುತ್ತ ಅವರೊಳಗೇ ಚರ್ಚೆ ನಡೆಯುತ್ತಿತ್ತು ,ಹಿಂದಿನ ಹೆರಿಗೆ ಸಂಭ್ರಮಗಳ ಬಗ್ಗೆ ! ಮೌನಿಯಾಗಿ , ಎಲ್ಲೋ ಇದ್ದ ನನ್ನ ಮಾತಾಡಿಸುವ ಸಾಹಸ ಅವರದ್ದು, ಅಲ್ಲಿ ನನ್ನವಳು ಒದ್ದಾಡುತ್ತಿರುವಾಗ ನಾ ಹೇಗೆ ಹರಟೆ ಹೊಡೆಯಲಿ,ನನಗೆ ಬೇಕಿತ್ತು ಮೌನ,ಏಕಾಂತ .
ಸಮಯ ಭಾರವಾಗಿ ಹೆಜ್ಜೆ ಹಾಕುತ್ತಿರುವಾಗ ನಾನೂ ಹೆಜ್ಜೆಯನ್ನಿಟ್ಟೆ ಆಸ್ಪತ್ರೆಯ ಮೆಟ್ಟಿಲಿನೆಡೆಗೆ, ಮೆಟ್ಟಿಲಿಳಿವಾಗ ಅಲ್ಲಿಯೂ ಕಂಡಿದ್ದು ನನ್ನ ಗಣಪನ ಒಂದು ಸುಂದರ ಮೂರ್ತಿ, ಹೆದರಿದಿರು ಮಂಕೇ ,ನಾನಿದ್ದೇನೆ ಎಂದು ಮುಗುಳ್ನಗುತ್ತ ನನಗೆ ಸಾಂತ್ವನ ಹೇಳಿದಂತಿತ್ತು ಅವನ ನೋಟ. ಅವನನ್ನೇ ದ್ರಷ್ಟಿಸುತ್ತಾ ಅಲ್ಲಿಯೇ ನಿಂತೆ ಸುಮಾರು ಹೊತ್ತು, ಯಾಕೋ ಈಗ ಸಮಯ ವೇಗವಾಗಿ ಸಾಗತೊಡಗಿತು !
ಅದೇ ಸಮಯದಲ್ಲಿ ಹೆರಿಗೆ ವಾರ್ಡಿನ ಬಾಗಿಲು ತೆರೆಯಿತು, ಎಲ್ಲರೂ ಅತ್ತ ಧಾವಿಸಿದೆವು.ಒಬ್ಬಳು ನರ್ಸಮ್ಮ ಹೊರ ಬಂದವಳೇ , ಆತಂಕ ಬೇಡ, ಆರಾಮಾಗಿದ್ದಾರೆ ಎಂದಳು. ಆರಾಮಿಗಿದ್ದಾರೆ ಅದು ಸರಿ,ಆದರೆ ಯಾರು ಯಾರು ಎಂಬ ಕುತೂಹಲ.ನಾನಂತೂ ಮೌನಿಯಾಗಿದ್ದೆ, ನನ್ನ ಮನೆಯವಳ ತಾಯಿಗೆ ತಡೆಯಲಾಗಲಿಲ್ಲ, ಕೇಳಿದಳು ನರ್ಸಮ್ಮನನ್ನ , ಹೆರಿಗೆ ಆಯಿತೇ, ಹೆರಿಗೆ ಆದರೆ ಕಂದಮ್ಮ ಹೇಗಿದೆ,ಗಂಡೋ ಹೆಣ್ಣೋ ?
ನನ್ನ ಮತ್ತು ನನ್ನ ಮನೆಯವಳ ಇಬ್ಬರ ಭಾವನೆಯಲ್ಲೂ ಗಂಡಾಗಲಿ ಹೆಣ್ಣಾಗಲಿ ,ಹುಟ್ಟುವ ಕೂಸು ಆರೋಗ್ಯವಂತನಾಗಿದ್ದರೆ ಆಯಿತು . ಹೆಣ್ಣಾದರೆ ಒಂದು ಚಂದ,ಗಂಡಾದರೆ ಇನ್ನೊಂದು ಬಗೆಯದ್ದು., ಯಾವುದಾದರೂ ಸಂತಸವೆಂಬ ಬಯಕೆ.
ಹೀಗಿರುವಾಗ ನರ್ಸಮ್ಮ ಎಂದಳು , ಗಂಡು ಮಗು ಜನಿಸಿದೆ ಎಂದು,ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದಾಗ ಅಲ್ಲಿದ್ದ ಎಲ್ಲರಲ್ಲೂ ಸಂಭ್ರಮ,ಖುಶಿಯೋ ಖುಶಿ.ಅಜ್ಜನ ಸಂಭ್ರಮ, ಅಜ್ಜಿಯ ಸಡಗರ. ಬಹು ದಿನದ ನಂತರ ಅಜ್ಜ ಅಜ್ಜಿ ಆದ ಅವರ ಆನಂದಕ್ಕೆ ಪಾರವೇ ಇಲ್ಲ , ಆದರೆ ನನಗೆ ?
ಯಾಕೋ ಗೊತ್ತಿಲ್ಲೆ, ಆ ಸಮಯದಲ್ಲಿ ನನ್ನಲ್ಲಿನ ಭಾವ ಯಾವುದು ಎಂಬುದನ್ನು ವಿವರಿಸುವದು ಕಷ್ಟ, ಅವಸರದಲ್ಲಿ ಓಡಿ ಹೋಗಿ, ಸಿಕ್ಕ ಬಾತ್ ರೂಮನ್ನು ಹೊಕ್ಕು ಕದ ಜಡಿದೆ, ಕಣ್ಣೀರ ಧಾರೆ ಉಕ್ಕಿತ್ತು , ಸಂಭ್ರಮದ ,ಖುಶಿಯ ಕಣ್ಣೀರೋ ಗೊತ್ತಿಲ್ಲ,ಆದರೆ ಸುಮಾರು ಹೊತ್ತು ತಡೆಯಲಾಗದಷ್ಟು ಬಿಕ್ಕಳಿಕೆ.ನೀರೆರೆಚಿಕೊಂಡು, ಒರೆಸಿಕೊಂದೆ ಮುಖವನ್ನು. ಹೊರಗೆ ಬಂದು ಎಲ್ಲರ ಸಂಭ್ರಮದಲ್ಲಿ ನಾನೂ ಭಾಗಿಯಾದೆ. ಆಗ ಒಂದು ಸಮಾಧಾನ, ಅಂತೂ ನಾನೂ ಅಪ್ಪನಾದೆ ಎಂದು. ಈ ವಿಷಯವನ್ನು ಬಸ್ಸಿನಲ್ಲಿ ಬರುತ್ತಿರುವ ನನ್ನ ಹೆತ್ತಮ್ಮನಿಗೆ ಹೇಳುವ ಆಸೆಯಿಂದ ಮೊಬೈಲ್ ನಂಬರ್ ಒತ್ತಿದೆ, ಆದರೆ ಬೇಕಾದಾಗಲೆಲ್ಲಾ ಹೇಗೆ ಸಿಕ್ಕೀತು ಆ ನೆಟ್ ವರ್ಕ್ , ಬೇಸರ ವಾಯಿತು, ಇರಲಿ ಆಮೇಲೆ ಹೇಳಿದರಾಯಿತು ಎಂದುಕೊಂಡು, ತಂಗಿಗೆ ಫೋನ್ ಮಾಡಿ ವಿಷಯ ತಿಳಿಸುವಾಗಲೂ ಮತ್ತೆ ಗಂಟಲು ಕಟ್ಟಿತ್ತಲ್ಲಾ! ದೊಡ್ಡಮ್ಮ ಬೆಳಗಿನಿಂದಲೂ ಸುಮಾರು ಸಲ ವಿಚಾರಿಸಿದ್ದಳು ಇಲ್ಲಿನ ಬಗ್ಗೆ,ಅವಳಿಗೆ ಕರೆ ಮಾಡಿದಾಗ "ಏನಾಯ್ತೋ ಮಗನೇ, ಸಿಹಿ ಸುದ್ದಿ ಇದೆಯೋ " ಅಂದಾಗ " ದೊಡ್ಡಮ್ಮ ,ಅಂತೂ ಅಪ್ಪನಾದೆ " ಅಷ್ಟೆ ನನ್ನ ಬಾಯಿಂದ ಬಂದಿದ್ದು. ಮುಂದೆ ಮಾತು ಹೊರಡಲು ನನ್ನ ಗಂಟಲು ಸಹಕರಿಸಲಿಲ್ಲ. ದೊಡ್ಡಮ್ಮ ನನ್ನ ಹೆತ್ತಮ್ಮನಿದ್ದಂತೆ.
ಆಮೇಲೆ ಸುಧಾರಿಸಿಕೊಂಡು ಎಲ್ಲರಿಗೂ ವಿಷಯ ಮುಟ್ಟಿಸಿದೆ. ಅಷ್ಟೇ ಹೊತ್ತಿನಲ್ಲಿ ನನ್ನ ಮಗ ,ನನ್ನ ಪ್ರಥಮ ಕುಮಾರನನ್ನು ಎತ್ತಿಕೊಂಡು ನರ್ಸಮ್ಮ ಬಂದಳು, ಅಲ್ಲಿ ಇದ್ದವರಿಗೆ ಖುಶಿ,ಅರೆ ಚಂದ ಇದೆಯಲ್ಲಾ ಮಗು ಎಂದು, ಯಾರ ಹಾಗಿರಬಹುದು,ಅಪ್ಪನ ಹೋಲಿಕೆಯೋ,ಅಮ್ಮನದ್ದೋ ಎಂಬ ಚರ್ಚೆ.ಬಹಳಷ್ಟು ಜನ ಇದೇ ಪ್ರಷ್ನೆ ಕೇಳುತ್ತಾರೆ,ಆದರೆ ನನಗೆ ಯಾವಾಗಲೂ ಗೊತ್ತಾಗುವುದಿಲ್ಲ ಅದೂ ಪ್ರಥಮ ದಿನವೇ ಹೇಗೆ ಹೇಳಲು ಸಾಧ್ಯ. ಗೊತ್ತಾಗದ ನಾನು ಮತ್ತು ನನ್ನ ಹಸುಗೂಸು ಸುಮ್ಮನಿದ್ದೆವು ! ಆ ನನ್ನ ಕಂದ ನನ್ನನ್ನೇ ದ್ರಷ್ಟಿಸಿ ಅಪ್ಪಾ ಅಂದ ಹಾಗೆ ಅನ್ನಿಸಿತು. ಅರೆ ಇಂದಿನಿಂದ ನಾನು ಒಬ್ಬ ಉಂಡಾಡಿ ಗುಂಡನಲ್ಲ. ನನ್ನ ಕರುಳಿನ ಕುಡಿಯ ಪೋಷಕ ಎಂಬ ಭಾವ. ಮನಸ್ಸಿನಲ್ಲೇ ಅಂದುಕೊಂಡೆ " ಮಗನೇ,ಈ ಭುವಿಗೆ ನಿನಗೆ ಸ್ವಾಗತ,ನಿನ್ನ ತಂದೆ ಕಣೋ ನಾನು,ನಿನ್ನ ಮುಂದಿನ ಪಾಲಕ,ಗೆಳೆಯ, ಪ್ರೋತ್ಸಾಹಕ, ನಾನು ನಿನಗೆ ಮೊದಲ ಉಡುಗೊರೆ ಕೊಟ್ಟೆದ್ದೇನೋ, ಕಣ್ಣೀರ ಹನಿಗಳನ್ನು"
ಹಿಂದೆಯೆ ನನ್ನ ಮಡದಿ, ಪ್ರಥಮ ಪ್ರಸವವಾದ ಸಂಭ್ರಮದೊಂದಿಗೆ ರೂಮಿಗೆ ಬಂದಾಗ ಒಂದು ಹೂಮುತ್ತನ್ನಿಟ್ಟೆ ಅವಳ ಹಣೆಯ ಮೇಲೆ. ಮನಸ್ಸಿನಲ್ಲೇ ಒಂದು ಧನ್ಯವಾದವನ್ನೂ ಕೊಟ್ಟೆ , ನನ್ನ ಬಾಳಿಗೆ ಒಂದು ಅರ್ಥವನ್ನು ಕೊಟ್ಟಿದ್ದಕ್ಕೆ.ಬೆಳಿಗ್ಗೆಯಿಂದ ಒದ್ದಾಡಿದವಳು ಇವಳೇನೋ ಅನ್ನಿಸಿತು, ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಕೂಗಿದ್ದು ಮರೆತೇ ಹೋಗಿದ್ದಳವಳು.ಮಂದಹಾಸ ಅವಳ ಮುಖವನ್ನು ತುಂಬಿತ್ತು. ಅಮ್ಮನಾದ ಧನ್ಯತೆ ಇತ್ತು.ಅವಳನ್ನು ಮಾತಾಡಿಸಿ ,ಪಕ್ಕದಲ್ಲೇ ಮಲಗಿ ಬಾಯಿ ಆಡಿಸುತ್ತಿದ್ದ ನನ್ನ ಕಂದಮ್ಮನನ್ನು ದಿಟ್ಟಿಸತೊಡಗಿದೆ, ಎಷ್ಟು ನೋಡಿದರೂ ಕಡಿಮೆ,ನೋಡುತ್ತಲೇ ಇರಬೇಕೆಂಬ ಬಯಕೆ, ಅವನ ರೂಪವನ್ನು ಕಣ್ತುಂಬಿಸಿಕೊಳ್ಳುವ ಆಸೆ, ನನ್ನವಳು ಕೈ ಚಿವುಟಿದಳು ! ಸಾಕು ನೋಡಿದ್ದು, ಅಪ್ಪ ಅಮ್ಮನದ್ದೇ ದ್ರಷ್ಟಿ ತಾಗುತ್ತಂತೆ ಹಸಿಗೂಸಿಗೆ ಎಂದಾಗ ಎಲಾ ಇವಳಾ ,ತನಗೆ ನೋಡಲಿಕ್ಕೆ ಆಗ್ತಾ ಇಲ್ಲಾ ಎದ್ದು ಕೂತು ಅದಿಕ್ಕೆ ನನ್ನನ್ನೂ ನೋಡುವುದು ಬೇಡ ಅನ್ನುತ್ತಿರಬಹುದು ಅಂದುಕೊಂಡೆ.ಮನಸ್ಸಿನಲ್ಲಿ ಬೈದುಕೊಂಡರೂ ನನ್ನವಳನ್ನು ನೋಡುಲು ಆನಂದವಾಗುತ್ತಿತ್ತು ನನಗೆ, ಮಾತ್ರತ್ವ ಪಡೆದ ಪ್ರಸನ್ನ ಭಾವ ಇತ್ತು ಅವಳಲ್ಲಿ.
ಅಷ್ಟರಲ್ಲೇ ನನ್ನ ಅಪ್ಪ ಅಮ್ಮನ ಆಗಮನ. ಅಜ್ಜ ಅಜ್ಜಿಯಾದ ಸಂಭ್ರಮ. ಆನಂದಮಯ ಆ ಸಮಯ. ಅವರಿಗೆ ಅತ್ಯಂತ ದೊಡ್ಡ ಘಳಿಗೆ. ತಮಗೇ ಮಗುವಾದಾಗಲೂ ಇಷ್ಟು ಸಂಭ್ರಮವಿತ್ತೋ ಇಲ್ಲವೋ,ಆದರೆ ಮಗನ ಮಗನನ್ನು ನೋಡಿ ಅವರ ಬಾಲ್ಯ ಮರುಕಳಿಸಿತ್ತು. ಮೊಮ್ಮಗುವನ್ನು ನೋಡುವ ಹೊತ್ತಿನಲ್ಲಿ ಪಕ್ಕದಲ್ಲೇ ನಿಂತಿದ್ದ ಮಗನನ್ನೂ ಮರೆತಿದ್ದರವರು. ಸ್ವಲ್ಪ ಹೊತ್ತಿನ ನಂತರ ಅಪ್ಪ . ತಮ್ಮಾ ಅಂತೂ ಅಪ್ಪನಾದೆ ಎಂದು ಬಿಗಿದಪ್ಪಿಕೊಂಡಾಗ ನಾನು ಮನಸ್ಸಿನಲ್ಲಿ ಅಂದುಕೊಂಡೆ " ಹೌದು ಅಪ್ಪಾ ,ಚಿಕ್ಕವನಾಗಿದ್ದಾಗ ನಿನ್ನಂತೆ ಆಗಬೇಕೆಂದುಕೊಂಡಿದ್ದೆ,ತಡವಾದರೂ ಈಗ ಆದೆನಾ ಅಪ್ಪ. ನನ್ನ ಜವಾಬ್ದಾರಿಗಳ ಸರಣಿಗೆ ಮಗುವೆಂಬ ಇನ್ನೊಂದು ಜವಾಬ್ದಾರಿ ಸೇರ್ಪಡೆಯಾಯಿತು"
ರಾತ್ರಿ ಆಸ್ಪತ್ರೆಯಲ್ಲಿ ಇಬ್ಬರೂ ಅಜ್ಜಿಯಂದಿರು ಇರುವುದೆಂದು ನಿರ್ಧಾರವಾಯಿತು,ಬಾಕಿಯವರನ್ನು ಕಳುಹಿಬಂದೆ.ಆಮೇಲೆ ಊಟ ಮುಗಿಸಿ ಅಮ್ಮನನ್ನು ಕರೆದುಕೊಂಡು ಹೋಗುವಾಗ ಅಮ್ಮನೆಂದಳು " ತಮ್ಮಾ ,ನೀನು ಬರುತ್ತೀಯೆಂದು ಚಕ್ಕಲಿ ,ವಡೆ ಮಾಡಿದ್ದೆ,ನೋಡಿದ್ರೆ ಈಗ ಹಬ್ಬವೂ ಇಲ್ಲ, ನೀನೂ ಬರುವುದಿಲ್ಲ ಮನೆಗೆ,ಇಲ್ಲಿಂದನೇ ಆಫೀಸಿಗೆ ಹೋಗ್ತಿನಿ ಅಂತಿದಿಯಾ!!!" ಇದೇನಪ್ಪಾ,ನನ್ನಮ್ಮನ ಯೋಚನೆ. ನನಗೆ ಮಗು ಮಲಗಿರಬಹುದೆ, ಅಳುತ್ತಿರಬಹುದೇ ಎಂಬ ಚಿಂತೆಯಾದರೆ ,ಇವಳಿಗೆ ವಡೆ ಚಕ್ಕುಲಿಯ ಚಿಂತೆ ಆಯಿತಲ್ಲಾ. ಆದರೆ ಅವಳ ಭಾವನೆ ತಪ್ಪಲ್ಲವಲ್ಲಾ. ಯಾಕೆಂದರೆ ಅಮ್ಮ ಮಾಡುವದು ತನಗಾಗಿ ಅಲ್ಲ ತನ್ನ ಮಕ್ಕಳಿಗಾಗಿ.ಆದರೆ ಪಾಪ ತನ್ನ ಮಗ ತಿನ್ನಲು ಬರುವುದಿಲ್ಲವಲ್ಲಾ ಎಂಬ ಸಂಕಟ. ನಾನು ಬರೀ ಒಂದು ದಿನದ ಪಿತ,ಅಷ್ಟರಲ್ಲೇ ನನ್ನ ಮಗನ ಬಗ್ಗೆ ಚಿಂತೆ, ಆದರೆ ಅವಳೋ ಬಹಳಷ್ಟು ವರ್ಷಗಳಿಂದ ನನ್ನ ಅಮ್ಮ.
ಆಯಿತಮ್ಮಾ ,ನೋಡ್ತಿನಿ ಸಾಧ್ಯ ಆದರೆ ಬರ್ತೇನೆ ಎಂದೆ.
ರಾತ್ರಿ ಗಂದಸರು ಇರಗೊಡುವದಿಲ್ಲ ಆಸ್ಪತ್ರೆಯಲ್ಲಿ, ಆದ್ದರಿಂದ ಮತ್ತೊಮ್ಮೆ ನಿದ್ರಿಸುತ್ತಿದ್ದ ಮಗನ ಮುಖವನ್ನು ನೋಡಿ ಹೊರಟವನಿಗೆ , ಮತ್ತೆ ನೆನಪಾಗಿದ್ದು ಗಣಪ, ನಮ್ಮ ಗಣಪ !
ನಾ ನಂಬಿದ ದೇವರು ಅವನ ಅಮ್ಮನ ದಿನದಂದು ,ನನಗೆ ಉಡುಗೊರೆಯನ್ನಿತ್ತನಲ್ಲಾ ಎಂದು ಗಣಪನಿಗೆ ಮನಸ್ಸಿನಲ್ಲೇ ಒಂದು ಧನ್ಯವಾದವನ್ನು ಕೊಟ್ಟೆ.ಆಸ್ಪತ್ರೆಯಲ್ಲೇ ಇದ್ದ ಅವನ ಮೂರ್ತಿಗೆ ಕೈ ಮುಗಿದೆ. ಮಣ್ಣಿನ ರೂಪದಲ್ಲಿ ಚೌತಿಯಂದು ನಮ್ಮ ಮನೆಗೆ ಬರುವ ಗಣಪ , ಈಗ ನನಗೊಂದು ಅವನ ರೂಪವನ್ನೇ ಕೊಟ್ಟನೋ ಅಂದುಕೊಂಡು ಮುಗುಳ್ನಕ್ಕೆ.
*******************************************************
ಆಸ್ಪತ್ರೆಯಲ್ಲಿದ್ದೇನೆ ನನ್ನ ಪುಟ್ಟ ಸಂಸಾರದೊಟ್ಟಿಗೆ,ನನ್ನ ಕಂದನೊಂದಿಗೆ,ಅಬ್ಬಾ ಅವನೋ ತನ್ನ ಪುಟ್ಟ ಪುಟ್ಟ ಕಣ್ಣುಗಳನ್ನು ಮಿಟುಕಿಸುತ್ತ ಏನನ್ನೋ ಹುಡುಕುವ ಯತ್ನದಲ್ಲಿದ್ದಾನೆ,ಯಾರನ್ನು ಹುಡುಕುತ್ತಿರಬಹುದು,ಏನನ್ನು ಹುಡುಕುತ್ತಿರಬಹುದು,ನಾನೂ ನೋಡದ ಜಗತ್ತು ಅವನಿಗೆ ಗೊತ್ತಿರಬಹುದೇ ಎಂಬ ಶಂಕೆ ನನಗೆ.ಈಗಲೇ ಇವನ ಆಲೋಚನಾ ಸರಣಿ ಪ್ರಾರಂಭವಾಗಿದೆ ಎಂಬಂತೆ ಗಲ್ಲಕ್ಕೆ ತನ್ನ ಪುಟ್ಟ ಕೈಯನ್ನು ಕೊಟ್ಟು ಏನೋ ಯೋಚಿಸುತ್ತಿದ್ದಾನಲ್ಲ,ಮಲಗಿದಾಗಲೂ ಅದೇ ಭಂಗಿ.ಯಾಕೋ ಗೊತ್ತಿಲ್ಲ, ಒಮ್ಮೊಮ್ಮೆ ಎರಡೂ ಕೈಗಳನ್ನು ಆಶೀರ್ವದಿಸುವಂತೆ ಇಟ್ಟುಕೊಳ್ಳುವನಲ್ಲಾ ! ಅಸೆಯಾಗುತ್ತಿದೆ ಒಮ್ಮೆ ಕೈ ಮುಗಿದು ಬಿಡೋಣ ಎಂದು. ಆದರೆ ಬಾಕಿ ಜನರನ್ನು ನೋಡಿ ನನ್ನನ್ನು ನಾನೇ ನಿಯಂತ್ರಿಸಿಕೊಳ್ಳುವೆ, ಹಸುಗೂಸು ದೇವರ ಸಮಾನ ಎನ್ನುವರು ಹಿರಿಯರು,ತಪ್ಪೇನಿಲ್ಲ ನಮನ ಸಲ್ಲಿಸಲು ಅಂದುಕೊಂಡೆ. ಆಗಾಗ ಕಿರುಚಾಟ, ಮತ್ತೆ ಕಿರು ನಿದ್ರೆ, ಏನೇ ಮಾಡಿದರೂ ಒಂದು ಸುಂದರತೆ. ಮುಗ್ಧತೆ,ಈ ಮುಗ್ಧ ಜೀವಿಗೆ ಮುಂದೆ ತುಂಬುವುದಿದೆಯಲ್ಲಾ ಎಲ್ಲಾ ವಿಷಯಗಳನ್ನು.
ಬಹಳಷ್ಟು ನೆಂಟರಿಷ್ಟರೂ ಬಂದಿದ್ದರು ನಮ್ಮನ್ನು ಮಾತಾಡಿಸಲು. ಎಲ್ಲರನ್ನೂ ಮಾತಾಡಿಸುತ್ತಾ ಕಂದಮ್ಮನೊಂದಿಗೆ ಇದ್ದೆ, ಆದರೆ ಆಫೀಸ್ ಕರೆಯುತ್ತಲಿದೆ,ಅದಕ್ಕೆ ಹೊರಟೆ, ವಾಪಸ್,ನನ್ನ ಕುಮಾರ ಕಂಠೀರವನಿಗೊಂದು ಮುತ್ತನ್ನಿಟ್ಟು. ಬರುವೆ ಮಗನೇ ನಿನ್ನ ನೋಡಲು ಬೇಗನೇ ಎನ್ನುತ್ತಾ.
No comments:
Post a Comment