Thursday, October 4, 2012

ಒಂದು ಸಣ್ಣ ಕಥೆ

ಆಫೀಸಿನಿಂದ ಅವನು ಸುಸ್ಥಾಗಿ ಸಾಯಂಕಾಲ ಬಂದರೆ ಕಂಡಿದ್ದೇನು, ಅವನ ಮೂರು ಜನ ಮಕ್ಕಳು ಮನೆಯಂಗಳದಲ್ಲಿ ಕೆಸರಾಟ ಆಡುತ್ತಿದ್ದಾರೆ, ಓದು ಬರಹದ ಪರಿವೆಯೆ ಇಲ್ಲದೆ.ಗಾರ್ಡನ್ನಿನಲ್ಲಿ ಅವರ ಬಟ್ಟೇ ದಿಕ್ಕಾಪಾಲಾಗಿ ಬಿದ್ದಿದೆ,ಹಿರಿಯವನ ಸೈಕಲ್ ಗಟಾರದಲ್ಲಿ, ಅವನ ಕಾರಿನ ಡೋರ್ ಓಪನ್ ಆಗಿದೆ ! ನಾಯಿಯ ಪತ್ತೆ ಇಲ್ಲಾ, ಇವನ ಸುಸ್ಥು ಜಾಸ್ಥಿ ಆಗಿತ್ತು ಆಗ. ಹಾಗೆನೆ ನೋಡಿದರೆ ಮನೆಯ ಹೆಬ್ಬಾಗಿಲು ಮುಚ್ಚಿಲ್ಲ ,ಕಳ್ಳರನ್ನ ಕರೆಯುತ್ತಾ ಇದೆ. ಛೇ ಏನಿದು ಅವಸ್ಥೆ ಎಂದು ಮನೆಯ ಒಳಗೆ ಬಂದರೆ ಇನ್ನು ಅಧ್ವಾನ, ಮೂರ್ಛೆ ಹೋಗುವುದೊಂದೆ ಬಾಕಿ, ದಿಕ್ಕಾಪಾಲಾಗಿ ಬಿದ್ದಿರುವ ಆಟಿಗೆ ಸಾಮಾನುಗಳು,ಮಕ್ಕಳ ಬಟ್ಟೆಗಳು, ಪುಸ್ಥಕಗಳು. ದೊಡ್ಡ ಶಬ್ದದೊಂದಿಗೆ ಪ್ರೇಕ್ಷಕರಿಲ್ಲದೆ ಇದ್ದರೂ ಅರಚುತ್ತಿರುವ ಕಾರ್ಟೂನ್ ಚಾನೆಲ್ . ಮನಸ್ಸಿನಲ್ಲೇ "ಛೆ ಇಷ್ಟೆಲ್ಲಾ ಆದ್ರು ಇವಳೆಲ್ಲಿ ಹಾಳಾಗೋದ್ಲು " ಅಂತ ಬಯ್ದುಕೊಳ್ಳುತ್ತಾ ,ಶೂ ಬಿಚ್ಚುವ ವ್ಯವಧಾನವೂ ಇಲ್ಲದೆ ಅಡಿಗೆ ಮನೆಗೆ ಹೋದನು. ಅಡಿಗೆ ಮನೆಯಲ್ಲಿ ಅವನನ್ನ ಸ್ವಾಗತಿಸಿದ್ದು ಎಲ್ಲಾ ಕಡೆ ಹರಡಿರುವ ಗೋಧಿ ಹಿಟ್ಟು, ಹಾರಾಡುತ್ತಿರುವ ಚಾಕಲೇಟ್ ಮೇಲಿನ ಪ್ಲಾಸ್ಟಿಕ್,ಬಾಗಿಲು ತೆರೆದು ನಗುತ್ತಿರುವ ಫ್ರಿಡ್ಜು. ಆದ್ರೆ ಅಲ್ಲಿಯೂ ಕಾಣ್ಸಿಲ್ಲ ಮನೆಯವಳು. ಹಾಗೆ ಹೊರಗೆ ಬಂದ್ರು ಟಿ ವಿ ಆರ್ಸಿದ್ರೆ ಒಳಗಿನ ಬಚ್ಚಲು ಮನೆಯಿಂದ ಸಣ್ಣಗೆ ನೀರು ಬೀಳುವ ಶಬ್ದ ,ನೋಡಿದ್ರೆ ಬಾಗಿಲು ತೆರೆದೇ ಇದೆ! ಒಳ ಹೊಕ್ಕವನು ಜಾರಿ ಬೀಳದೇ ಇದ್ದಿದ್ದು ಆಶ್ಚರ್ಯ,ಡ್ರೇನ್ ನ್ನು ಬಟ್ಟೆ ಯಿಂದ ತುರುಕಿ, ಪೇಸ್ಟನ್ನ ಚೆಲ್ಲಿ ಸಣ್ಣ ಸಮುದ್ರವೇ ಇತ್ತು ಅಲ್ಲಿ. ಟ್ಯಾಪ್ ಬಂದ್ ಮಾಡಿ ಮಕ್ಕಳ ರೂಮಿ ಗೆ ಹೋಗುವಾಗ ಇಣುಕಿದರೆ ದೇವರ ಮನೆಯಲ್ಲು ಕಾಣಲಿಲ್ಲ ಮನೆಯವಳು. ಎಲ್ಲಿ ಸತ್ತಳು ಇವಳು ಎನ್ನುತ್ತ ಮಕ್ಕಳ ರೂಮಿಗೆ ಹೋದರೆ ಅಲ್ಲಿಯ ಪರಿಸ್ಥಿತಿ ದೇವರಿಗೆ ಪ್ರೀತಿ. ಸಿಟ್ಟು ಸಿಕ್ಕಾಪಟ್ಟೆ ಬರ್ತಾ ಇದ್ರುನು ಏನೊ ಒಂದು ತರಹದ ಘಾಬರಿ ಏನಾಯ್ತು ಇವಳಿಗೆ,ಎಲ್ಲಿಗ್ ಹೋಗಿರಬಹುದು ಎಂದು. ಮಹಡಿಯ ತನ್ನ ರೂಮನ್ನ ನೋಡಲು ಬೇಗ ಬೇಗ ಉಸಿರು ಬಿಡುತ್ತಾ ಹತ್ತಿದವ ರೂಮಿಗೆ ಹೋದರೆ
.
.
.
.
.
.
.
ಸ್ವಾಗತಿಸಿದ್ದು ಸುಶ್ರ್ಯಾವ್ಯದ ಪಂ . ಹಾಸಣಗಿ ಗಣಪತಿ ಭಟ್ಟರ ರಾಗ ಮಾಲಕೌನ್ಸ್ ,ಏ ಸಿ ಯ ಕ್ರಪೆಯಿಂದ ತಣ್ಣನೆಯ ಗಾಳಿ, ಹೆಂಡತಿ ಯೆಂಬವಳು ಎರಡು ದಿಂಬನ್ನಿಟ್ಟು ಆರಾಮಾಗಿ ಕಾಲು ನೀಡಿ ಕಾದಂಬರಿ ಓದ್ತಾ ಇದ್ದಳು !!!!!!!!!!!!!!!! , ಇವನ ನೆತ್ತಿಗೆ ಪಿತ್ಥ ಏರಿದ್ದೇ " ಏನಿದು,ಮನೆಯೋ ಗೋಡೊವ್ನೋ ? ಇದೇನಾ ಮನೆ ನೋಡ್ಕೊಳೊ ರೀತಿ, ಛೆ,ಮನೆಯಲ್ಲಿದ್ದು ಏನ್ ಮಾಡ್ತೀಯಾ, ನಾನ್ ನೋಡಿದ್ರೆ ಹಗಲು ರಾತ್ರಿ ದುಡಿತಿನಿ " ಅಂದ. ಹೆಂಡತಿ ಶಾಂತವಾಗಿ ಕಿರು ನಗೆ ಯೊಂದಿಗೆ " ನೋಡಿದ್ರಾ,ನೀವೆ ಕೇಳ್ತಾ ಇದ್ರಿ ಮೊದಲು, ಮೂರ್ ಹೊತ್ತೂ ಮನೆಯಲ್ಲಿದ್ದು ಏನ್ ಮಾಡ್ತಿಯಾ ಅಂತ, ಇವತ್ತು ಏನೂ ಮಾಡಿಲ್ಲ,ಅದಿಕ್ಕೆ ಹಿಂಗೆ"


: inspiration from an email

No comments:

Post a Comment